ಜಾತಕದಲ್ಲಿ ಶುಕ್ರ ಸರಿ ಇಲ್ಲದಿದ್ದರೆ ವ್ಯಾಪಾರ ಬೇಡ
ಶುಕ್ರ ದಶೆಯೊಂದಿಗೆ ಜಾತಕದಲ್ಲಿಯೂ ಶುಕ್ರ ಉಚ್ಚ ಸ್ಥಿತಿ ಅಥವಾ ಮಿತ್ರ ಸ್ಥಾನ ಇತ್ಯಾದಿ ಶುಭಕರವಾಗಿ ಇರಬೇಕಾಗುತ್ತದೆ. ಅಷ್ಟೇ ಅಲ್ಲ, ಶುಕ್ರನ ವೈರಿ ಆದ ರವಿ ಗ್ರಹದ ದೃಷ್ಟಿ ಆಗಲಿ, ರವಿಯ ಜೊತೆ ಆಗಲಿ ಶುಕ್ರ ಜಾತಕದಲ್ಲಿ ಇದ್ದರೆ ಮತ್ತೆ ವ್ಯಾಪಾರಕ್ಕೆ ಅಥವಾ ವ್ಯಾಪಾರದಲ್ಲಿ ಲಾಭಕ್ಕೆ ಧಕ್ಕೆ ಆಗುತ್ತದೆ.
ಇನ್ನು ಕೆಲವರಿಗೆ ಹಲವು ವರ್ಷಗಳಿಂದ ಲಾಭ ಮಾಡುತ್ತಲಿದ್ದ ವ್ಯಾಪಾರ ಇದ್ದಕ್ಕಿದ್ದಂತೆ ದೊಡ್ಡ ಪ್ರಮಾಣದ ನಷ್ಟದಲ್ಲಿ ಸಿಲುಕುತ್ತದೆ. ಎಷ್ಟು ಪ್ರಯತ್ನ ಮಾಡಿದರೂ ಸಮಸ್ಯೆ ಅಥವಾ ನಷ್ಟದ ಮೂಲ ಹುಡುಕಲು ಆಗದು. ಅದಕ್ಕೆ ಶುಕ್ರ ಸಂಬಂಧಿತ ಹಲವು ಕಾರಣಗಲ್ಲಿ ದುಷ್ಪರಿಣಾಮ ಎದುರಿಸಬೇಕು.
ಹೌದು ವ್ಯಕ್ತಿಯೊಬ್ಬರಿಗೆ ಇಪ್ಪತ್ತು ವರ್ಷ ಕಾಲ ಶುಕ್ರ ದಶೆ ಇರುತ್ತದೆ. ಇನ್ನು ಜಾತಕದಲ್ಲಿಯೂ ಶುಕ್ರ ಅಂಥವರಿಗೆ ಉತ್ತಮ ಸ್ಥಿತಿಯಲ್ಲಿ ಇದ್ದಲ್ಲಿ ಆ ವರುಷಗಳಲ್ಲಿ ವ್ಯಾಪಾರದಲ್ಲಿ ಲಾಭ ಕಾಣುವರು. ಶುಕ್ರ ದಶೆ ಮುಗಿಯುತ್ತಿದ್ದಂತೆ ನಂತರ ರವಿ ದಶೆ ಪ್ರಾರಂಭ ಆಗುವುದರಿಂದ ಇಲ್ಲಿ ರವಿ ಹಾಗೂ ಶುಕ್ರ ಗ್ರಹರು ಪರಸ್ಪರ ವೈರಿಗಳಾಗಿದ್ದು, ಅದರ ದುಷ್ಪರಿಣಾಮ ಆ ವ್ಯಕ್ತಿ ಅನುಭವಿಸ ಬೇಕಾಗುತ್ತದೆ. ಹೀಗೆ ವ್ಯಾಪಾರದಲ್ಲಿ ಯಶಸ್ಸು ಕಾಣಲು ಶುಕ್ರ ಗ್ರಹ ಬಹಳ ಮುಖ್ಯ!
ನಿಮ್ಮ ಜಾತಕದಲ್ಲಿ ಶುಕ್ರ ಉತ್ತಮ ಸ್ಥಿತಿಯಲ್ಲಿ ಇದ್ದರೂ ನೀವು ಮಾಡುತ್ತಿರುವ ವ್ಯಾಪಾರದ ವಸ್ತು/ವಿಚಾರ ಇತ್ಯಾದಿಗಳನ್ನು ಸೂಚಿಸುವ ಗ್ರಹ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಮತ್ತೆ ನಷ್ಟ ನಿಮಗೆ ಕಟ್ಟಿಟ್ಟ ಬುತ್ತಿ. ಆದುದರಿಂದ ನೀವು ವ್ಯಾಪಾರ ಮಾಡುವ ಮೊದಲು ನೀವು ಆಯ್ದ ವ್ಯಾಪಾರ ನಿಮ್ಮ ಜಾತಕದ ಪ್ರಕಾರ ಕೂಡಿ ಬರುತ್ತದೆಯೇ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
ಉದಾಹರಣೆಗೆ ಜಾತಕದಲ್ಲಿ ಕುಜ ಗ್ರಹ ಉತ್ತಮವಾಗಿ ಇಲ್ಲದ ವ್ಯಕ್ತಿ ರಿಯಲ್ ಎಸ್ಟೇಟ್, ಹೋಟೆಲ್ ಅಥವಾ ವಿದ್ಯುತ್ ಉಪಕರಣಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡಲು ಹೊರಟರೆ ನಷ್ಟ ಆಗುವ ಸಾಧ್ಯತೆಗಳಿರುತ್ತವೆ. ಗುರು ಅಥವಾ ಬುಧ ಗ್ರಹ ಉತ್ತಮ ಸ್ಥಿತಿಯಲ್ಲಿ ಇಲ್ಲದವರು ಔಷಧಾಲಯ, ವೈದ್ಯಶಾಲೆ, ಟ್ಯೂಶನ್ ಅಥವಾ ವಿದ್ಯಾಲಯ ಇತ್ಯಾದಿಗಳಿಗೆ ಸಂಬಂಧಿಸಿದ ವ್ಯಾಪಾರಗಳನ್ನು ಮಾಡಲು ಹೋಗಬಾರದು.
ಶುಕ್ರನೇ ಜಾತಕದಲ್ಲಿ ಸರಿ ಇಲ್ಲದಿದ್ದರೆ ವ್ಯಾಪಾರ ಬೇಡ
ಹಾಗೆಯೇ ಜಾತಕದಲ್ಲಿ ರವಿ ಹಾಗೂ ಶನಿ ಗ್ರಹ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಸರಕಾರದ ಕೆಲಸ ಗುತ್ತಿಗೆ ತೆಗೆದುಕೊಂಡು ರಸ್ತೆ, ಸೇತುವೆ ಇತ್ಯಾದಿಗಳ ನಿರ್ಮಾಣ ಮಾಡುವುದು ಅಥವಾ ಯಾವುದೇ ವಿಧದಲ್ಲಿ ಕಬ್ಬಿಣ ಬಳಸಿ ಮಾಡುವ ನಿರ್ಮಾಣ ಕೆಲಸಗಳಿಗೆ ಕೈ ಹಾಕಿದಲ್ಲಿ ಕೈ ಸುಟ್ಟಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ಇನ್ನು ಸ್ವತಃ ಶುಕ್ರನೇ ಸರಿಯಾದ ಸ್ಥಾನದಲ್ಲಿ ಇಲ್ಲದಾಗ ವ್ಯಾಪಾರವನ್ನೇ ಮಾಡಬಾರದು. ಅದರಲ್ಲಿಯೂ ಬಡ್ಡಿಗೆ ಸಾಲ ಕೊಡುವುದು, ಷೇರು ಮಾರುಕಟ್ಟೆ, ಚಲನಚಿತ್ರ ನಿರ್ಮಾಣ ಇತ್ಯಾದಿಗಳಿಂದ ಸಾಧ್ಯವಾದಷ್ಟೂ ದೂರ ಇರುವುದು ಒಳ್ಳೆಯದು